NationalPosted at: Apr 20 2019 5:49PM Shareಕಾಂಗ್ರೆಸ್ ಮಾಜಿ ಸಂಸದ ಕೊಲ್ಲಂ ಎಸ್.ಕೃಷ್ಣ ಕುಮಾರ್ ಬಿಜೆಪಿ ಸೇರ್ಪಡೆನವದೆಹಲಿ, ಏ 20 (ಯುಎನ್ಐ) ಕೊಲ್ಲಂ ಕ್ಷೇತ್ರದ ಕಾಂಗ್ರೆಸ್ನ ಮಾಜಿ ಸಂಸದ ಎಸ್.ಕೃಷ್ಣ ಕುಮಾರ್ ಶನಿವಾರ ಬಿಜೆಪಿ ಸೇರ್ಪಡೆಯಾದರು.ಇಲ್ಲಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ಶಹನಾಜ್ ಹುಸೇನ್ ಮತ್ತು ರಾಜ್ಯ ಸಭಾ ಸದಸ್ಯ ಅನಿಲ್ ಬಲುನಿ ಅವರ ಸಮ್ಮುಖದಲ್ಲಿ ಕೃಷ್ಣ ಕುಮಾರ್ ಬಜೆಪಿ ಸೇರ್ಪಡೆಯಾದರು.ಕುಮಾರ್ ಅವರನ್ನು ಬರಮಾಡಿಕೊಂಡ ಹುಸೇನ್, ಬಿಜೆಪಿಗೆ ಕುಮಾರ್ ಸೇರ್ಪಡೆಯಿಂದ ಪಕ್ಷಕ್ಕೆ ಇನ್ನಷ್ಟು ಬಲ ಬಂದಿದೆ ಎಂದು ಹೇಳಿದರು.ರಾಜೀವ್ ಗಾಂಧಿ, ನರಸಿಂಹ ರಾವ್ ಸರ್ಕಾರದಲ್ಲಿ ಮಾಡಿದ್ದೇನೆ. ಆದರೆ ಮೋದಿ ಅವರು ತಮ್ಮ ಜೀವನವನ್ನು ದೇಶಕ್ಕೆ ಅರ್ಪಿಸಿದ್ದಾರೆ. ಮುಂದಿನ 10 ವರ್ಷಕ್ಕೆ ಭಾರತೀಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನಾದೇಶ ನೀಡಬೇಕು. ಸೋನಿಯಾ ಗಾಂಧಿ ಮತ್ತು ಅವರ ಪುತ್ರನ ನಾಯಕತ್ವವನ್ನು ತಾವು ಒಪ್ಪುವುದಿಲ್ಲ ಎಂದು ಹೇಳಿದರು.ಮಾಜಿ ಐಎಎಸ್ ಅಧಿಕಾರಿಯಾಗಿರುವ ಕುಮಾರ್ ಈ ಹಿಂದೆಯೂ ಬಿಜೆಪಿ ಸೇರಿ ಒಂದು ವರ್ಷದ ಬಳಿಕ ಪಕ್ಷ ತೊರೆದಿದ್ದರು.ಯುಎನ್ಐ ಎಎಚ್ ಕೆವಿಆರ್ 1750