ಶಿವಮೊಗ್ಗ, ಏ 20 (ಯುಎನ್ಐ) ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆಗೆ ನಾಳೆ ಸಂಜೆ ಬಹಿರಂಗ ಪ್ರಚಾರ ಅಂತ್ಯವಾಗಲಿದ್ದು ಶಿವಮೊಗ್ಗದ ಭದ್ರಾವತಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ರೋಡ್ ಶೋ ನಡೆಸಿ ಬಿಜೆಪಿಯ ಪರ ಹವಾ ಎಬ್ಬಿಸಿದ್ದಾರೆ.
ಪಟ್ಟಣದ ರಂಗಪ್ಪ ಸರ್ಕಲ್ ನಿಂದ ಆರಂಭವಾದ ರೋಡ್ ಶೋ, ಪ್ರಮುಖ ರಸ್ತೆಗಳಲ್ಲಿ ಸಾಗಿತು. ರೋಡ್ ಶೋ ನಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿ ಎಲ್ಲಾ ಕಡೆ ಮೋದಿ, ಮೋದಿ, ಮೋದಿ ಎಂಬ ಘೋಷಣೆಗಳು ಮುಗಿಲುಮುಟ್ಟುತ್ತಿದ್ದವು. ರಸ್ತೆಗಳ ಉದ್ದಕ್ಕೂ ಕೇಸರಿ ಬಾವುಟಗಳು, ಕೇಸರಿ ಟೋಪಿಗಳು ರಾರಾಜಿಸುತ್ತಿದ್ದವು.
ಅಮಿತ್ ಶಾ ಅವರಿಗೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಶಾಸಕರಾದ ಹರತಾಳ ಹಾಲಪ್ಪ ಮತ್ತು ಅಶೋಕ್ ನಾಯಕ್ ಸೇರಿದಂತೆ ಸ್ಥಳೀಯ ನಾಯಕರು ಹಾಜರಿದ್ದರು.
ಯುಎನ್ಐ ಯುಎಲ್ ಕೆಎಸ್ಆರ್ ಜಿಎಸ್ಆರ್ 1225