Saturday, Apr 27 2024 | Time 00:26 Hrs(IST)
Special Share

ಕಾಶ್ಮೀರ ಹೆದ್ದಾರಿಯಲ್ಲಿ ನಾಗರಿಕ ಸಂಚಾರ ನಿಷೇಧ ತೆರವು

ಜಮ್ಮು, ಏ 20 (ಯುಎನ್‌ಐ) ಶ್ರೀನಗರ ಮತ್ತು ಬಾರಾಮುಲ್ಲಾ ಹೆದ್ದಾರಿಯ ಮೇಲಿನ ನಿಷೇಧ ತೆರವುಗೊಳಿಸಲಾಗಿದ್ದು, ಬುಧವಾರದಿಂದ ನಾಗರಿಕ ಸಂಚಾರಕ್ಕೆ ಮುಕ್ತಾವಗಲಿದೆ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಶನಿವಾರ ಆದೇಶಿಸಿದೆ
ಶ್ರೀನಗರ-ಉದ್ದಂಪುರ ಹೆದ್ದಾರಿಯಲ್ಲಿನ ನಿಷೇಧ ಮೊದಲಿನಂತೆ ಮುಂದುವರಿಯಲಿದೆ. ಶ್ರೀನಗರ-ಬಾರಾಮುಲ್ಲಾ ರಾಷ್ಟ್ರೀಯ ಹೆದ್ದಾರಿ-44ರಲ್ಲಿ ಭಾನುವಾರ ಮಾತ್ರ ನಿಷೇಧ. ಏ.22ರಿಂದ ನಾಗರಿಕ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಸರ್ಕಾರದ ವಕ್ತಾರರು ಹೇಳಿದ್ದಾರೆ
ಭದ್ರತಾ ದೃಷ್ಟಿಯಿಂದಾಗಿ ಈ ತಿಂಗಳ ಮೊದಲಿಗೆ ಸರ್ಕಾರ ಎನ್‌ಎಚ್‌-44ರಲ್ಲಿ ನಾಗರಿಕ ಸಂಚಾರವನ್ನು ನಿಷೇಧಿಸಿತ್ತು. ಕೇವಲ ಭದ್ರತಾ ಪಡೆಯ ಸಂಚಾರಕ್ಕೆ ಮಾತ್ರ ಈ ಹೆದ್ದಾರಿ ಬಳಕೆಯಾಗುತ್ತಿತ್ತು.
ಯುಎನ್‌ಐ ಕೆಎಸ್‌ವಿ ವಿಎನ್‌ಎಲ್‌ 2317
There is no row at position 0.