SpecialPosted at: Apr 20 2019 11:16PM Shareಕಾಶ್ಮೀರ ಹೆದ್ದಾರಿಯಲ್ಲಿ ನಾಗರಿಕ ಸಂಚಾರ ನಿಷೇಧ ತೆರವುಜಮ್ಮು, ಏ 20 (ಯುಎನ್ಐ) ಶ್ರೀನಗರ ಮತ್ತು ಬಾರಾಮುಲ್ಲಾ ಹೆದ್ದಾರಿಯ ಮೇಲಿನ ನಿಷೇಧ ತೆರವುಗೊಳಿಸಲಾಗಿದ್ದು, ಬುಧವಾರದಿಂದ ನಾಗರಿಕ ಸಂಚಾರಕ್ಕೆ ಮುಕ್ತಾವಗಲಿದೆ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಶನಿವಾರ ಆದೇಶಿಸಿದೆಶ್ರೀನಗರ-ಉದ್ದಂಪುರ ಹೆದ್ದಾರಿಯಲ್ಲಿನ ನಿಷೇಧ ಮೊದಲಿನಂತೆ ಮುಂದುವರಿಯಲಿದೆ. ಶ್ರೀನಗರ-ಬಾರಾಮುಲ್ಲಾ ರಾಷ್ಟ್ರೀಯ ಹೆದ್ದಾರಿ-44ರಲ್ಲಿ ಭಾನುವಾರ ಮಾತ್ರ ನಿಷೇಧ. ಏ.22ರಿಂದ ನಾಗರಿಕ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಸರ್ಕಾರದ ವಕ್ತಾರರು ಹೇಳಿದ್ದಾರೆಭದ್ರತಾ ದೃಷ್ಟಿಯಿಂದಾಗಿ ಈ ತಿಂಗಳ ಮೊದಲಿಗೆ ಸರ್ಕಾರ ಎನ್ಎಚ್-44ರಲ್ಲಿ ನಾಗರಿಕ ಸಂಚಾರವನ್ನು ನಿಷೇಧಿಸಿತ್ತು. ಕೇವಲ ಭದ್ರತಾ ಪಡೆಯ ಸಂಚಾರಕ್ಕೆ ಮಾತ್ರ ಈ ಹೆದ್ದಾರಿ ಬಳಕೆಯಾಗುತ್ತಿತ್ತು.ಯುಎನ್ಐ ಕೆಎಸ್ವಿ ವಿಎನ್ಎಲ್ 2317