ವಯನಾಡ್, ಏ 20 (ಯುಎನ್ಐ) ಎಲ್ಲರನ್ನು ಒಳಗೊಂಡ ಅಭಿವೃದ್ಧಿಯೊಂದಿಗೆ ದೇಶ ಸಬಲೀಕರಣಗೊಳ್ಳಬೇಕು ಎಂಬುದು ಕಾಂಗ್ರೆಸ್ನ ಉದ್ದೇಶವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಪೂರ್ವ ಉತ್ತರ ಪ್ರದೇಶದ ಉಸ್ತುವಾರಿ) ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ವಯನಾಡ್ನಿಂದ ಸ್ಪರ್ಧಿಸಿರುವ ಸಹೋದರ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪರವಾಗಿ ಇಂದಿಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆದಿವಾಸಿಗಳು, ದಲಿತರು ಮತ್ತು ಬಡವರಿಗೆ ಮೋಸ ಮಾಡುವ ಮೂಲಕ ಬಿಜೆಪಿ ದೇಶವನ್ನು ನಾಶ ಮಾಡಿದೆ. ಮಾತ್ರವಲ್ಲ ಕೆಲವೇ ಕೆಲವು ಶ್ರೀಮಂತರಿಗೆ ಸಹಾಯ ಮಾಡಿದೆ ಎಂದು ಆರೋಪಿಸಿದರು.
ನೋಟು ಅಮಾನ್ಯೀಕರಣದಿಂದ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಮಾತ್ರವಲ್ಲ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಜಾತ್ಯತೀತ ಆಧಾರದಲ್ಲಿ ದೇಶವನ್ನು ವಿಭಜಿಸಿದೆ ಎಂದು ಹೇಳಿದರು.
ಬಿಜೆಪಿ ಹಿಂದಿನಿಂದಲೂ ತಮ್ಮ ಸಹೋದರ, ಪೋಷಕರು ಮತ್ತು ಅಜ್ಜ-ಅಜ್ಜಿಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದೆ. ಆದರೆ ಇಂತಹ ಎಲ್ಲಾ ಕುಚೋದ್ಯಗಳನ್ನು ಎದುರಿಸಲು ರಾಹುಲ್ ಸಮರ್ಥರಿದ್ದಾರೆ ಎಂದು ಹೇಳಿದ ಪ್ರಿಯಾಂಕಾ, ದೇಶದ ಜನರನ್ನು ಸಮಾನವಾಗಿ ಮತ್ತು ಪಕ್ಷಪಾತರಹಿತವಾಗಿ ರಾಹುಲ್ ನೋಡುತ್ತಾರೆ ಎಂದು ಹೇಳಿದರು.
ಯುಎನ್ಐ ಎಎಚ್ ಕೆವಿಆರ್ 1731